ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಮನೆಯಲ್ಲಿ ಒಂದು ಉದ್ಧವಾದ ಸ್ಟೀಲ್ ಲೋಟವಿತ್ತು ,ಅದರ ಕೆಳಭಾಗ ಸ್ವಲ್ಪ ಅಪ್ಪಚ್ಚಿಯಾಗಿತ್ತು. ಅಮ್ಮ ಆ ಲೋಟದಲ್ಲಿ ಕಾಫಿ ಯಾ ನೀರನ್ನು ನಮ್ಮ ಮನೆಯ ಹೂಟಿ ಆಳು (ಗೆದ್ದೆ ಹೂಳಲು ಬಳಸುವ ಎಮ್ಮೆಗಳನ್ನು ಸಂಭಾಳಿಸುವವರಿಗೆ ನಮ್ಮ ಕಡೆ ಈ ಹೆಸರಿನಿಂದ ಕರೆಯುತ್ತಾರೆ ) ಸಿದ್ಧಯ್ಯನಿಗೆ ಮಾತ್ರ ಕೊಡುತಿದ್ದರು. ಬೇರೆ ಯಾವ ಕೆಲಸದವರಿಗೂ , ನಾನು ಎಷ್ಟು ಬೇಡಿದರೂ ನನಗೂ ಅದರಲ್ಲಿ ಏನು ಕೊಟ್ಟ ನೆನಪು ನನಗಿಲ್ಲ. ಅಸ್ಪ್ರಶ್ಯತೆ , ಕೆಲಸದವರೆಂದು ಮೇಲು-ಕೀಳು ಎಂದು ಭೇದ-ಭಾವ ಮಾಡದ ನಮ್ಮ ಮನೆಯಲ್ಲಿ ಈ ಸ್ಟೀಲ್ ಲೋಟ ಸಿದ್ಧಯ್ಯನಿಗೆ ಮಾತ್ರ ಮೀಸಲಾಗಿದ್ದಿದ್ದು ಒಂದು ಹಾಸ್ಯ ಘಟನೆ , ಅದನ್ನು ತಿಳಿಯಲು ಕೊನಯವರೆಗೂ ಓದಿ ....
ಈ ಘಟನೆ ಸ್ಮ್ರತಿಪಟಲದಲ್ಲಿ ಕೆಲವೊಮ್ಮೆ ಬರುತ್ತಿತ್ತಾದರೂ ಇಲ್ಲಿ ಅಕ್ಷರಗಳಿಗೆ ಇಳಿಸುವಷ್ಟು ಧ್ರಢವಾಗಿರಲಿಲ್ಲ . ಈತ್ತೀಚೆಗೆ ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರಾದ "ವಸುಧೇಂದ್ರ" ರ ಹಂಪಿ express ನಲ್ಲಿ ಬರುವ ಸೀಳು ಲೋಟ ಕಥೆಯನ್ನು ಓದುತಿದ್ದೆ , ಅದೇ ಈ ಬರಹಕ್ಕೆ ಪ್ರೇರಣೆ .. ವಸುಧೆಂದ್ರರು ಮನೀಷೆ , ಯುಗಾದಿ,ಚೇಳು, ಹಂಪಿ express ಮೊದಲಾದ ಕಥಾಸಂಕಲನಗಳನ್ನೂ , ಕೋತಿಗಳು , ನಮ್ಮಮ್ಮ ಅಂದ್ರೆ ನಂಗಿಷ್ಟ ,ರಕ್ಷಕ ಅನಾಥ ಮೊದಲಾದ ಪ್ರಬಂಧ ಸಂಕಲನಗಳನ್ನು ಬರೆದಿರುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ,ಮಾಸ್ತಿ ಕಥಾ ಪುರಸ್ಕಾರ ,ಬೇಂದ್ರೆ ಪುಸ್ತಕ ಬಹುಮಾನ ,ವರ್ಧಮಾನ ಉದಯೋನ್ಮುಖ , ಕಥಾರಂಗಂ ಮೊದಲಾದ ಪ್ರಶಸ್ತಿಗಳನ್ನು ತಮ್ಮ ವಿಭಿನ್ನ ಶ್ಯೆಲಿಯ ಬರಹಗಳಿಗೆ ಪಡೆದಿದ್ದಾರೆ. ನನ್ನ ಈ ಚಿಕ್ಕ ಬರಹ ಅವರಿಗೆ ಅರ್ಪಣೆ ..
ಅಂದ ಹಾಗೆ ಮೂಲ ವಿಷಯಕ್ಕೆ ಬರೋಣ, ಕಥಾವಸ್ತುವಾದ ಈ ಉದ್ದದ , ಬುಡ ಅಪ್ಪಚ್ಚಿಯಾಗಿದ್ದ ಈ ಸ್ಟೀಲ್ ಲೋಟ ತನ್ನ ಮೂಲ ಆಕ್ರತಿಯಲ್ಲಿದ್ದಾಗ ಒಮ್ಮೆ ಸಿದ್ಧಯ್ಯನಿಗೆ ಅಮ್ಮ ಕಾಫಿ ಮಾಡಿ ಗೆದ್ದೆಗೆ ಕಳುಹಿಸಿದ್ದರಂತೆ , ಅವತ್ತು ಅವನು ಆಕಸ್ಮಾತ್ ಆಗಿ ಎಮ್ಮೆಯ ಕಾಲಿಗೆ ಸಿಕ್ಕಿ ಲೋಟ ಅಪ್ಪಚ್ಚಿ ಆಗೋಕೆ ದಾರಿ ಮಾಡಿದ್ದ. ಯಾರೋ ಅವನಿಗೆ ಅದಕ್ಕೋಸ್ಕರ ತಮಾಷೆ ಮಾಡಿದ್ದರಂತೆ ಆ ದಿನ. ಆಮೇಲೆ ಅವನೇ ಸ್ವಪ್ರೇರಣೆಯಿಂದ ಅದೇ ಲೋಟದಲ್ಲಿ ಕಾಫಿ ಕೇಳಿ ಪಡೆಯುತಿದ್ದನಂತೆ. ಹೀಗೆ ನಮ್ಮ ಮನೆಯ ಸ್ಟೀಲ್ ಲೋಟವೊಂದು ಸಿದ್ಧಯ್ಯನ patent ಗೆ ಒಳಪಟ್ಟಿತ್ತು. ಸಿದ್ಧಯ್ಯ ಇಂದು ತನ್ನ ಬಾಳ ಮುಸ್ಸಂಜೆಯಲ್ಲಿದ್ದು ಕೆಲಸ ಬಿಟ್ಟು ದಶಕದ ಮೇಲೇ ಆಗಿದೆ , ಸಿದ್ಧಯ್ಯನ ಮುಖೇನ ಎಮ್ಮೆ ತುಳಿತಕ್ಕೆ ಒಳಗಾಗಿ ಅಪ್ಪಚ್ಚಿಯಾದ ಲೋಟ ಇಂದು ಎಲ್ಲೋ ಕಳೆದು ಹೋಗಿದೆ.
No comments:
Post a Comment